Discover millions of ebooks, audiobooks, and so much more with a free trial

Only $11.99/month after trial. Cancel anytime.

Karala Garbha
Karala Garbha
Karala Garbha
Ebook181 pages54 minutes

Karala Garbha

Rating: 0 out of 5 stars

()

Read preview

About this ebook

ಲೇಖಕನ ಕಿರು ಪರಿಚಯ:

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್. ಹುಟ್ಟಾ ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ನಾನು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರ.

ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ.

ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.

ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ

LanguageKannada
Release dateAug 12, 2019
ISBN6580216801969
Karala Garbha

Read more from Nagesh Kumar Cs

Related authors

Related to Karala Garbha

Related ebooks

Reviews for Karala Garbha

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Karala Garbha - Nagesh Kumar CS

    http://www.pustaka.co.in

    ಕರಾಳ ಗರ್ಭ

    Karala Garbha

    Author:

    ನಾಗೇಶ್ ಕುಮಾರ್ ಸಿಎಸ್

    Nagesh Kumar CS

    For more books

    http://www.pustaka.co.in/home/author/nagesh-kumar-cs

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕರಾಳ ಗರ್ಭ

    (ಒಂದು ರಹಸ್ಯಮಯ ಪತ್ತೇದಾರಿ ಕಾದಂಬರಿ)

    * ನಾಗೇಶ್ ಕುಮಾರ್ ಸಿ ಎಸ್

    © 2016 Nagesh Kumar CS ಲೇಖಕರದು

    Karala Garbha by Nagesh Kumar CS is licensed under a Creative Commons Attribution-NoDerivatives 4. 0 International License.

    (ಈ ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ಸ್ಥಳಗಳು ಕಾಲ್ಪನಿಕವೆಂದೂ ಯಾವುದೇ ನಿಜಜೀವನದ ವ್ಯಕ್ತಿ/ ಸ್ಥಳಗಳಿಗೆ ಸಂಬಂಧಿಸುದುದಲ್ಲಾ ಎಂದು ತಿಳಿಸಿಸಲಾಗಿದೆ)

    ನನ್ನ ಆಫೀಸಿನ ಟೇಬಲ್ ಮೇಲೆ ಕಾಲು ಚಾಚಿ ಕಣ್ಮುಚ್ಚಿ ಮಲಗಿರುವಾಗ’ಮಿಂಚಾಗಿ ನೀನು ಬರಲು’ ಎಂಬ ಹಾಡಿನ ರಿಂಗ್ ಟೋನಿನೊಂದಿಗೆ ಎಬ್ಬಿಸಿತು ನನ್ನ ಮೊಬೈಲ್ ಫೋನ್.

    ಇದು ನನ್ನದೇ ಆಫೀಸ್, ನಾನೊಬ್ಬನೆ ಇದ್ದಿದ್ದು, ಹಾಗಾಗಿ ನನ್ನ ಪ್ರಪಂಚ ಶಾಂತವಾಗಿದೆ ಅಂದು ಕೊಳ್ಳುತ್ತಿರುವಾಗಲೇ... ಛೆ! ಯಾರಿದು?

    ಹಲೋ, ವಿಜಯ್ ದೇಶಪಾಂಡೆಯವರು ತಾನೆ? ಎಂದು ನನ್ನ ಮೊಬೈಲ್ ನಲ್ಲಿ ಕಿವಿಗೆ ಬಡಿದಿತ್ತು ಆಕೆಯ ದನಿ.

    ಮೊದಲೇ ನನಗೆ ಹಿಂದಿನ ರಾತ್ರಿಯ ಭಾರೀ ಪಾರ್ಟಿಯ ಹ್ಯಾಂಗೋವರ್ ನಿಂದ ತಲೆ ಸಿಡಿಯುತಿತ್ತು.

    ನಾನಲ್ಲದಿದ್ದರೆ, ನನ್ನ ದ್ವನಿಯ ಭೂತ ಇರಬೇಕು ಇಲ್ಲಿ... ಎಂದೆ ಬೇಸರವಾದವನಂತೆ.

    ಒಂದು ಕ್ಷಣ ಅಹಿತಕರ ಮೌನ.

    ನೀವು ಒರಟರೆಂದು ಕೇಳಿದ್ದೆ, ಆದರೂ ಮೊದಲ ಬಾರಿಯೇ ಹೀಗೆ? ಎಂದು ಅನುಮಾನಿಸಿತು ಮುನಿದ ಹೆಣ್ಣಿನ ದನಿ.

    ಇದು ನನ್ನ ಒಳ್ಳೆ ಮೂಡ್ ನಲ್ಲಿ ಆಡಿದ ಮಾತು ಅನ್ಕೊಳ್ಳಿ... ಸರಿ, ನಾನೇ ವಿಜಯ್, ಏನಾಗಬೇಕಿತ್ತು?

    "‘ಆ ಟಿ. ವಿ’ ಚಾನೆಲ್ ನ" ಸುಂದರ ಸಂಸಾರ ಸೀರಿಯಲ್ ನಲ್ಲಿ ಮಾಡುವ ಮೃದುಲಾ ಹೊಸಮನಿ ಗೊತ್ತು ತಾನೆ ನಿಮ್ಗೆ?.. ಎಂದಳು ಆಕೆ, ಎಲ್ಲರಿಗೂ ಗೊತ್ತಿರಲೇಬೇಕು ಎಂಬ ವಿಶ್ವಾಸದಿಂದ.

    ನಾನು ಟೇಬಲ್ ನಿಂದ ಕಾಲು ಕೆಳಗಿಡುತ್ತಾ ನಿಡುಸುಯ್ದೆ.

    ಇಲ್ಲಾ, ಆ ಗೋಳು ಸೀರಿಯಲ್ ಬಂದ ತಕ್ಷಣ ನಾನು ಮೈನ್ ಸ್ವಿಚ್ ಆರಿಸುತ್ತೇನೆ.. ಎಂದೆ.

    ನನಗಿವತ್ತು ಯಾವ ಕ್ಲಯಂಟ್ ಕಾಟವೂ ಬೇಕಿರಲಿಲ್ಲ..

    ಹುಂ..!! ಎಂದು ಗುಟುರು ಹಾಕಿ ಆಕೆ ನೋಡಿ, ನಾನವರ ಸೆಕ್ರೆಟರಿ ವಿನುತಾ… ನಿಮ್ಮನ್ನು ಭೇಟಿ ಮಾಡಲು ಇವತ್ತು ಸಂಜೆ ಅವರು ನಿಮ್ಮ ಆಫೀಸಿಗೆ ಬರುತ್ತಾರಂತೆ... ಎಂದಳು, ನಿಮಗೆ ಆಫೀಸ್ ಕೂಡಾ ಇದೆಯೆ ಎನ್ನುವ ಅನುಮಾನದ ದನಿಯಲ್ಲಿ.

    ಆದರೆ ನನ್ನ ಆಫೀಸಿನಲ್ಲಿ ಅವರಿಗೆ ಶೂಟಿಂಗ್ ಮಾಡಲು ನಾನು ಬಿಡುವುದಿಲ್ಲವಲ್ಲಾ.!. ಯಾಕೆ ಬರುತ್ತಾರೆ?ಎಂದೆ ತಪ್ಪಿಸಿಕೊಳ್ಳಲು ನನ್ನ ಕೊನೆ ಅಸ್ತ್ರವೆಂಬಂತೆ.

    ಆಕೆ ರಂಪ ಮಾಡುವ ಮಕ್ಕಳಿಗೆ ಸಮಜಾಯಿಶಿ ಮಾಡುವ ದನಿಯಲ್ಲಿ, ನೋಡಿ ಮಿ. ವಿಜಯ್, ನಿಮ್ಮ ಹೆಸರನ್ನು ಹೇಳಿ’ಇವರು ಈ ಊರಿನ ಬೆಸ್ಟ್ ಪತ್ತೇದಾರ, ಜಾಣ ಡಿಟೆಕ್ಟಿವ್’ ಎಂದಿದ್ದರು ಮಿ. ವಿಶಾಲ್ ಕಪೂರ್.. ಹಾಗಾಗಿ ನಾವು.. ಎಂದಳು,ಇದಕ್ಕಿಂತ ತಾನು ಹೆಚ್ಚಾಗಿ ಹೇಳಲಾರೆ ಎಂಬಂತೆ

    ನಾನು ಸೀಟ್ ನಲ್ಲಿ ಅರ್ಧ ಎಗರಿಬಿದ್ದೆ..

    ವಿಶಾಲ್ ಕಪೂರ್ ನನ್ನ ಹಳೆಯ ಕಕ್ಷಿದಾರ. ಅದಕ್ಕಿಂತ ಮುಖ್ಯವಾಗಿ ಟಿ. ವಿ. ಜಗತ್ತಿನ ಅನಭಿಶಿಕ್ತ ದೊರೆ.. ನನ್ನ ದಿನಗಳು ಚೆನ್ನಾಗಿದ್ದಾಗ ನಾನು ಅವರ ಒಂದು ಬ್ಲಾಕ್ ಮೈಲ್ ಕೇಸ್ ನಲ್ಲಿ ಜಯಿಸಿಕೊಟ್ಟಿದ್ದೆ. ಅವರು ನೀಡಿದ್ದ ಸಂಭಾವನೆ ನನಗೆ ಆರು ತಿಂಗಳ ಖರ್ಚು ತೂಗಿತ್ತು.... ಅವರೇ ಹೇಳಿರಬೇಕಾದರೆ?.. ತಲೆ ನೋವು ದೂರವಾದಂತೆ ಭಾಸವಾಯಿತು.

    ಅವರ ಕೇಸ್ ಆಗಿ ಬಹಳ ಸಮಯವಾಯ್ತು... ಈಗ ಏನಾಗಬೇಕು ನಿಮ್ಮ ಮೇಡಮ್ ಗೆ? ಎಂದೆ ಸ್ವಲ್ಪ ಎಚ್ಚರಿಕೆಯಿಂದ, ದೊಡ್ಡವರ ಸೆಕ್ರೆಟರಿಗಳಿಗೆ ಪ್ರತಿಷ್ಟೆ ಜಾಸ್ತಿ ಎಂದು ಅರಿತು!

    ಸಂಜೆ ಆರು ಗಂಟೆಗೆ ಬರುತ್ತಾರೆ ಅವರ ಲಾಯರ್ ಜತೆ, ಅವರನ್ನೇ ಕೇಳಿ... ನಿಮ್ಮ ವೈಯಾಲಿ ಕಾವಲ್ ಆಫೀಸ್ ಅಡ್ರೆಸನ್ನು ಯೆಲ್ಲೋ ಪೇಜಸ್ ನಲ್ಲಿ ನೋಡಿದ್ದೇನೆ... ಮೊಬೈಲ್ ನಂಬರ್ ಕೂಡಾ ಅಲ್ಲೆ ಸಿಕ್ತು! ಥ್ಯಾಂಕ್ ಯೂ! ಎಂದು ಮರು ಮಾತಾಡಲು ಬಿಡದೇ ಫೋನ್ ಕಟ್ ಮಾಡಿದ್ದಳು.

    ನಾನು ಮುಖ ಸೊಟ್ಟಗೆ ಮಾಡಿದೆ.. ಎಲ್ಲರಿಗೂ ನನ್ನಂತೆ ಹಾಸ್ಯ ಪ್ರವೃತ್ತಿ ಇರಲ್ಲ ನೋಡಿ!

    ನನ್ನ ಆಫೀಸಿನ ಹಳೇ ಮಾಸಿದ ಗೋಡೆಗಳು, ಹೋದ ವರ್ಷದ ಕ್ಯಾಲೆಂಡರ್ ನೋಡುತ್ತಾ’ಆದರೂ ನನ್ನ ಹತ್ತಿರ ಜನ ಬರುತ್ತಾರಲ್ಲಾ?’ ಎಂದೆಂದುಕೊಂಡೆ ಹೆಮ್ಮೆಪಡುತ್ತಾ.

    ಸ್ವಲ್ಪ ಕಕ್ಷಿದಾರರಿಗಾಗಿಯಾದರೂ ಫ್ರೆಶ್ ಆಗೋಣವೆಂದು ಎದ್ದೆ…

    ಬಾತ್ ರೂಮಿನ ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ನೋಡಿಕೊಂಡೆ.. ಹೊಸದೇನಿದೆ?.. ಅದೇ ಮೂವತ್ತು ವರ್ಷ ವಯಸ್ಸಿನ ನೀಳ ಕೂದಲಿನ ಬಿಸಿಲಿನಲ್ಲಿ ಹದವಾದ ಗೋಧಿವರ್ಣದ ಮುಖ… ಮುಖದಲ್ಲಿ ಬಲ ಹುಬ್ಬಿನ ಕೆಳಕ್ಕೆ ಚಾಕು ಹಾಕಿದ ಹಳೇ ಗಾಯದ ಗುರುತು.. ಐದಡಿ ಎಂಟಿಂಚು ಎತ್ತರದ ಯೋಗಾಭ್ಯಾಸ ಮಾಡುವ ತೆಳ್ಳಗಿನ ಮೈ,,ಸ್ವಲ್ಪ ಮಾತ್ರ ಶರ್ಟಿನಲ್ಲಿ ಎದ್ದು ಕಾಣುವ ಭುಜದ ಮಾಂಸಲ ಸ್ನಾಯುಗಳು… ಒಟ್ಟಿನಲ್ಲಿ ಹೆದರಿಕೆ ಬರುವಂತಾ ವ್ಯಕ್ತಿಯೇನಲ್ಲ. ಅದೃಷ್ಟವಿದ್ದರೆ ಯಾವುದಾದರೂ ಹೆಣ್ಣು ಅವಸರದಲ್ಲಿ ನನ್ನನು ಹ್ಯಾಂಡ್ ಸಮ್ ಎಂದು ತಪ್ಪು ತಿಳಿದುಕೊಳ್ಳಲೂ ಸಾಧ್ಯ.. ನನ್ನ ಅದೃಷ್ಟವಿದ್ದರೆ, ಅವಳದಲ್ಲ!.

    ಹೊರಗೆ ಬಂದು ಕೆಟಲ್ ನಲ್ಲಿ ಯಾವಾಗಲೂ ಸಿದ್ಧವಿರುವ ಕಾಫಿ ಬಗ್ಗಿಸಿಕೊಂಡು ಕುಡಿದು ಕುಳಿತೆ.

    ಸಮಯ ಆರಾಗುತ್ತಿತ್ತು ಆಗಲೇ.. ‘ಇವರಿಗೇನು ಗೊತ್ತಿತ್ತು ನಾನು ಆಫೀಸಿನಲ್ಲಿ ಸಿಕ್ಕೇ ಸಿಕ್ಕುತ್ತೇನೆಂದು? … ನಾನೊಬ್ಬನೆ ಪತ್ತೇದಾರನಲ್ಲ ಈ ಊರಿನಲ್ಲಿ… ಇವರಿಗೆಲ್ಲ ನನ್ನ ಸ್ಥಿತಿ ಗೊತ್ತೋ ಏನೋ?’.. ಎಂದೆಲ್ಲಾ ಯೋಚನೆಗಳು ಬಂದು ಹೋದವು.

    ಈ ನಾಲ್ಕು ತಿಂಗಳಿಂದ ಎರಡು ಅನುಮಾನಕ್ಕೆ ಗಂಡ ಹೆಂಡರ ಮೇಲೆ ನಿಗಾ ಇಡುವ ಕೇಸ್, ಎರಡು ಮುದುಕಿಯರ ಕಳೆದು ಹೋದ ಬೆಕ್ಕು ಹುಡುಕುವ ಕೇಸ್ ಗಳು ಸಿಕ್ಕಿದ್ದವು ಅಷ್ಟೆ… ಆದರೂ ಹೊಸ ಕೆಲಸ ಹುಡುಕಿಕೊಂಡು ಹೋಗುವಂತಾ ಚುರುಕ ನಾನಲ್ಲ. ಅಲ್ಪತೃಪ್ತ ನಾನು.

    "ವಿಜಯ್ ವಿಕ್ರಮ್ ಇನ್ವೇಸ್ಟಿಗೇಶನ್ಸ್" ಎಂಬುದು ನಾನು ಮತ್ತು ವಿಕ್ರಮ್ ಇಬ್ಬರೂ ಇಂಡಿಯನ್ ಮಿಲಿಟರಿ ಪೋಲಿಸ್ ಪಡೆಯಲ್ಲಿ ಈ ಹಿಂದೆ ಮೂರು ವರ್ಷ ಡಿಟೆಕ್ಟಿವ್ಸ್ ಸೇವೆ ಮಾಡಿ ಹೊರಕ್ಕೆ ಬಂದು ನಾವಿಬ್ಬರೂ ನಮ್ಮ ಉಳಿತಾವನ್ನೆಲ್ಲಾ ಇಟ್ಟು ಕಟ್ಟಿದ ಪತ್ತೇದಾರಿ ಸಂಸ್ಥೆ... ಏರುಪೇರುಗಳು ಹೆಚ್ಚಾಗಿ ಆರುತಿಂಗಳಿನಿಂದ ಕುಂಟುತಿತ್ತು ಬಿಝಿನೆಸ್ಸ್. ಬ್ರಹ್ಮಚಾರಿಗಳಾದರಿಂದ ಬಚಾವ್ ಆಗಿದ್ದೆವು ಅನ್ನಿ... ಹೇಗೋ ನಮ್ಮ ಪಾಲಿಗೆ ನಿಭಾಯಿಸಿಕೊಂಡು ಹೋಗಿದ್ದೆವು.

    ನಿನ್ನೆ ತಾನೇ, ಸ್ವಲ್ಪ ಹಣ ಕೂಡಿಟ್ಟಿದ್ದ ವಿಕ್ರಮ್ ತಾನು ಗೋವಾಗೆ ಹೋಗಿಬರುತ್ತೇನೆಂದು ಹೇಳಿದ್ದ..

    ಎಂತಾ ಕೆಲಸ ಬಂದರೂ ನೀನಿದ್ದಿಯಲ್ಲಾ... ಒಬ್ನೇ ಮಾಡ್ಕೊ… ನನಗೇನೂ ಕೊಡಬೇಡಾ ಎಂದು ನನ್ನ ಆಫೀಸಿನಿಂದ ಎಳೆದುಕೊಂಡು ಹೋಗಿ ರಾತ್ರಿ ಪಾರ್ಟಿ ಕೊಡಿಸಿದ್ದ, ಹೊರಟೂ ಹೋಗಿದ್ದ...

    ನನ್ನ ಸಿಗರೇಟ್ ಚಟ ಬಿಡಿಸಲು ಅದೇನೋ ಚೂಯಿಂಗ್ ಗಮ್ ಕೊಟ್ಟಿದ್ದ ವಿಕ್ರಮ್,’ಇದನ್ನು ತಿಂದು ನೋಡು’ ಎಂದಿದ್ದ ಆ ಸಿಗರೇಟ್ ಮುಟ್ಟದ ಭೂಪ.. ಅದನ್ನು ಬಾಯಿಗೆ ಹಾಕಿಕೊಂಡೆ, ನೋಡುವಾ ಎಂದು.

    ಹಾಗಾಗಿ ನನಗೆ ಈಗ ಕೆಲಸ ದುಡ್ಡು ಎರಡೂ ಬೇಕಿತ್ತು.. ಹೌದು ಹೌದು ಎಂದು ತಲೆಯಾಡಿಸುತ್ತಿದ್ದವು, ನನ್ನ ಟೇಬಲ್ ಮೇಲೆ ಚೆನ್ನಪಟ್ಟಣದ ಮೂರು ಕೋತಿ ಬೊಂಬೆಗಳು.

    ಮೃದುಲಾ ಹೊಸಮನಿ ಎಂಬ ಈ ನಟಿ ಚಿಕ್ಕ ತೆರೆ ಜಗತ್ತಿನ ದೊಡ್ಡ ತಾರೆ.

    ಆಕೆಯ’ಸುಂದರ ಸಂಸಾರ’ ಎಂಬ ಧಾರವಾಹಿ ಈ ಮೂರು ವರ್ಷಗಳಲ್ಲೇ ಬಂದ ಅತ್ಯಂತ ಯಶಸ್ವೀ ಕಣ್ಣೀರಿನ ಕತೆಗಳಲ್ಲಿ ಒಂದು. ಹೆಂಗಸರನ್ನು ಅಳಿಸಿ ದುಡ್ಡು ಮಾಡುವುದು ಒಂದು ಕಲೆಯೆಂದಾದರೆ ಈ ಧಾರಾವಾಹಿ ನಿರ್ಮಾಪಕರು ಅದರಲ್ಲಿ ಚಾಣಾಕ್ಷ ಡಕಾಯಿತರು ಎನ್ನಬಹುದು… ಅವರ ಯಶಸ್ಸಿನ ಕುರುಹಾದ ಟಿ. ಆರ್ ಪಿ ಕ್ರಮಾಂಕಗಳು ಸದಾ ನಂ. ೧ ಎಂದೇ ಕೊಚ್ಚಿಕೊಳ್ಳುತ್ತಿದ್ದವು. ನನ್ನ ಪ್ರಕಾರ ಮಾತ್ರ, ಇಷ್ಟು ಗಂಡನೇನಾದರೂ ಒಂದು ಹೆಂಡತಿಯನ್ನು ಅಳಿಸಿದ್ದರೆ ಬೇರೇನಾದರೂ ನೆಡೆದು ಹೋಗುತಿತ್ತು ಆ ಮನೆಗಳಲ್ಲಿ!..

    ತುಂಬು ಗುಂಗುರು ಕೂದಲಿನ ಕೇರಳ ಅಥವಾ ಕರಾವಳಿ ಭಾಗದ ಹೆಣ್ಣಿನಂತೆ ಕಾಣುವ ಈಕೆ ಉತ್ತರ ಕರ್ನಾಟಕದ’ಹೊಸಮನಿ’ ಹೇಗಾದಳು? ಎಂಬುದು ಯಾರಿಗೂ ತಿಳಿಯದು..

    ಅಂದು ಆಫೀಸಿಗೆ ಬಂದು ಪರಿಚಯವಾದನಂತರ ಆಕೆಯನ್ನು ಕೇಳಿದ ಮೊದಲ

    Enjoying the preview?
    Page 1 of 1